ಚಿಕ್ಕಮಗಳೊರು Sringeri Police ಕುದುರೆಗುಂಡಿ ಕೊಪ್ಪ ಜಯಪುರ ಬಾಳೆಹೊನ್ನೂರು ಹರಿಹರಪುರ ತೀರ್ಥಹಳ್ಳಿ

*ಶೃಂಗೇರಿ ಕ್ಷೇತ್ರ ಬಂದ್ ಗೆ ಕೊಪ್ಪದಲ್ಲಿ ಉತ್ತಮ ಬೆಂಬಲ*

ರೈತ ಒಕ್ಕೂಟ ಮತ್ತು ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಕರೆ ಕೊಟ್ಟ ಶೃಂಗೇರಿ ಕ್ಷೇತ್ರ ಬಂದ್ ಗೆ ಕೊಪ್ಪದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ.

avatar

  • February 23, 2026
  • 1 minute read
  • 2 Likes
  • 558 Views
*ಶೃಂಗೇರಿ ಕ್ಷೇತ್ರ ಬಂದ್ ಗೆ ಕೊಪ್ಪದಲ್ಲಿ ಉತ್ತಮ ಬೆಂಬಲ*
*ಶೃಂಗೇರಿ ಕ್ಷೇತ್ರ ಬಂದ್ ಗೆ ಕೊಪ್ಪದಲ್ಲಿ ಉತ್ತಮ ಬೆಂಬಲ*

ರೈತ ಒಕ್ಕೂಟ ಮತ್ತು ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಕರೆ ಕೊಟ್ಟ ಶೃಂಗೇರಿ ಕ್ಷೇತ್ರ ಬಂದ್ ಗೆ ಕೊಪ್ಪದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆಯಿಂದ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯದೆ ವ್ಯಾಪಾರಿ ಒಕ್ಕೂಟವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅಗತ್ಯ ವಸ್ತುಗಳಾದ ಹಾಲು ,ಹಣ್ಣು ,ತರಕಾರಿ ಮತ್ತು ಮೆಡಿಕಲ್ ಅಂಗಡಿ ಹೊರತು ಪಡಿಸಿದರೆ ಬಂದ್ ಗೆ ಉತ್ತಮ ರೀತಿಯಲ್ಲಿ ಬೆಂಬಲ ವ್ಯಕ್ತವಾಗಿದೆ. ಬಸ್ ಮತ್ತು ಖಾಸಗಿ ವಾಹನ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ ಹಾಗೂ ಶಾಲಾ ಕಾಲೇಜು ಎಂದಿನಂತೆ ಇರಲಿದೆ ಎಂದು ಸಂಬಂದ ಪಟ್ಟವರು ತಿಳಿಸಿದ್ದಾರೆ. ಎಸ್.ಎಸ್.ಎಲ್. ಸಿ. ಪ್ರಿಪರೇಟರಿ ಪರೀಕ್ಷೆ ಎಂದಿನಂತೆ ನಡೆಯಲಿದೆ ಎಂದು ತಿಳಿದು ಬಂದಿದೆ.

Gallery